ಮುತ್ತೂರಾಯಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಬೆಟ್ಟಹಳ್ಳಿ ಕಾವಲು ಗ್ರಾಮದಲ್ಲಿರುವ ಒಂದು ಸುಂದರ ಬೆಟ್ಟವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯವನ್ನು ಅನುಭವಿಸಲು ಇಷ್ಟಪಡುವವರಿಗೆ ಈ ಬೆಟ್ಟವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಕಾರಿನಲ್ಲಿ ವ್ಯೂ ಪಾಯಿಂಟ್ವರೆಗೆ ತಲುಪಬಹುದು, ಹಾಗೂ ಟ್ರೆಕ್ಕಿಂಗ್ ಅನುಭವಿಸಲು ಬಯಸುವವರಿಗೆ ಈ ಸ್ಥಳವು ಉತ್ತಮ ಆಯ್ಕೆಯಾಗಿದೆ.
ಮುತ್ತುರಾಯಸ್ವಾಮಿ ಬೆಟ್ಟದ ದೂರಗಳು
- ಬೆಂಗಳೂರು – 42 ಕಿ.ಮೀ
- ರಾಮನಗರ – 40 ಕಿ.ಮೀ
- ಕನಕಪುರ – 29 ಕಿ.ಮೀ
- ಹಾರೋಹಳ್ಳಿ – 15 ಕಿ.ಮೀ
- ಕಗ್ಗಲೀಪುರ – 15 ಕಿ.ಮೀ
ಬೆಟ್ಟದ ತುದಿಯವರೆಗೆ ಚಾರಣ ಮಾಡಬಹುದು ಅಥವಾ ನಿಮ್ಮ ವಾಹನದಲ್ಲಿಯೇ ಹೋಗಬಹುದು. ರಸ್ತೆಯ ಮೂಲಕ, ಚಾರಣ ಪ್ರಾರಂಭದ ಸ್ಥಳದಿಂದ ಬೆಟ್ಟದ ತುದಿಯವರೆಗೆ ನಡೆದುಕೊಂಡು ಸಹ ಹೋಗಬಹುದು. ಬೆಟ್ಟದ ಮೇಲ್ಭಾಗದಲ್ಲಿ ಮುತ್ತುರಾಯ (ಆಂಜನೇಯ) ದೇವಾಲಯವಿದೆ.
ಭೇಟಿ ನೀಡಿ





