ಸಂಗಮವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಗಮಗೊಳ್ಳುವ ಸ್ಥಳವಾಗಿದೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಜಲಕ್ರೀಡೆ ಹಾಗೂ ತೆಪ್ಪ ವಿಹಾರದ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸಂಗಮದ ದೂರಗಳು
- ಬೆಂಗಳೂರು – 92 ಕಿ.ಮೀ
- ರಾಮನಗರ – 63 ಕಿ.ಮೀ
- ಕನಕಪುರ – 33 ಕಿ.ಮೀ
ಅರ್ಕಾವತಿ ನದಿಯು ಕನಕಪುರ ಮಾರ್ಗವಾಗಿ ಸುಮಾರು 32 ಕಿಲೋಮೀಟರ್ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯ ಪ್ರದೇಶವನ್ನು ದಾಟಿ, ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ಎರಡು ನದಿಗಳ ಸಂಗಮದ ನಂತರ, ಕಾವೇರಿ ನದಿಯ ಎಡ ದಂಡೆಯಲ್ಲಿ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮೇಕೆದಾಟು ಇದೆ.
ಈ ಸ್ಥಳವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ‘ಮೇಕೆದಾಟು’ ಎಂದೇ ಪ್ರಸಿದ್ಧವಾಗಿರುವ ಈ ಪ್ರದೇಶದ ಅದ್ಭುತ ನೈಸರ್ಗಿಕ ಸೌಂದರ್ಯವು ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿ ಮತ್ತು ಕಾವೇರಿ ನದಿಗಳು ದಟ್ಟವಾದ ಅರಣ್ಯದ ಮಧ್ಯೆ ಹರಿಯುತ್ತಾ, ನದಿಯ ಪಾತ್ರವು ಕ್ರಮೇಣ ಕಿರಿದಾಗುತ್ತ ಸಾಗುತ್ತದೆ.
ಮುಂದೆ ಇಳಿಜಾರು ಹೆಚ್ಚಾಗುತ್ತಿದ್ದಂತೆ ನೀರಿನ ಹರಿವು ಪ್ರಬಲವಾಗಿ, ಇಡೀ ಪ್ರದೇಶವು ಗಂಭೀರ ನಾದದಿಂದ ಮೊಳಗುತ್ತದೆ. ಶತಮಾನಗಳ ಕಾಲ ನಿರಂತರವಾಗಿ ಹರಿದ ನೀರಿನ ಪ್ರವಾಹದಿಂದ ನದಿಯ ಇಕ್ಕೆಲಗಳ ಬಂಡೆಗಳು ವಿಚಿತ್ರ ಆಕಾರಗಳಲ್ಲಿ ಕೊರೆದು, ನಿಸರ್ಗವೇ ನಿರ್ಮಿಸಿದ ಮಹೋನ್ನತ ಶಿಲ್ಪಕಲಾಕೃತಿಗಳಂತೆ ಕಂಗೊಳಿಸುತ್ತವೆ.
ಭೇಟಿ ನೀಡಿ





