ಒಂಟಿಕಂಬದ ಮಠ ಹೊಳಲ್ಕೆರೆ

ಪುರಾತನ ಶ್ರೀ ಒಂಟಿಕಂಬದ ಮುರುಘಾ ಮಠವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಇರುವ ಸುಂದರ ಆಧ್ಯಾತ್ಮಿಕ ಸ್ಥಳವಾಗಿದ್ದು, ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ವಿಶ್ರಾಂತಿ ಸ್ಥಳವೂ ಆಗಿದೆ. ಇಲ್ಲಿ ಒಂಟಿಕಲ್ಲಿನ ಮಂಟಪ, ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ಐಕ್ಯ ಸಮಾಧಿ ಸ್ಥಳ ಹಾಗೂ ಪಕ್ಕದಲ್ಲಿ ಸುಂದರ ಪುಷ್ಕರಣಿ ಇದೆ.

ಒಂಟಿಕಂಬದ ಮಠ ಹೊಳಲ್ಕೆರೆಯ ದೂರಗಳು

  • ಬೆಂಗಳೂರು – 232 ಕಿ.ಮೀ
  • ಚಿತ್ರದುರ್ಗ – 32 ಕಿ.ಮೀ
  • ಹೊಳಲ್ಕೆರೆ – 2 ಕಿ.ಮೀ
  • ಹೊಳಲ್ಕೆರೆ ರೈಲ್ವೆ ನಿಲ್ದಾಣ – 8 ಕಿ.ಮೀ

ಒಂಟಿಕಲ್ಲಿನ ಮಂಟಪ

ಒಂಟಿಕಂಬದ ಕಲ್ಲಿನ ಮೇಲೆ, ಎಂಟು ಕಂಬಗಳ ಆಧಾರದ ಮೇಲೆ ಅಷ್ಟಾಕೋನ (ಎಂಟು ಭುಜಗಳಿರುವ ಆಕೃತಿ) ರೂಪದಲ್ಲಿ ಮಠದ ಮಂಟಪವನ್ನು ನಿರ್ಮಿಸಲಾಗಿದೆ. ಈ ರೀತಿಯ ನಿರ್ಮಾಣ ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿರುವ ಫತೇಪುರ್ ಸಿಕ್ರಿಯಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಮಂಟಪವು ಸುಮಾರು 13ನೇ ಶತಮಾನದ್ದಾಗಿರಬಹುದು ಎಂದು ಸಿರಾದ ಡಾ. ನಂದೀಶ್ ಎಂಬ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪೃಷ್ಕರಣಿ

ಇದು ಒಂದು ಸುಂದರ ಪುಷ್ಕರಣಿಯಾಗಿದೆ. ಪುಷ್ಕರಣಿಯು ಚೌಕಾಕೃತಿಯಲ್ಲಿದ್ದು, ಇದರ ಅಳವು ಸುಮಾರು 50 ಅಡಿ ಇರಬಹುದೆಂದು ಅಭಿಪ್ರಾಯಿಸಲಾಗಿದೆ. ಈ ಪುಷ್ಕರಣಿಯನ್ನು ಸ್ಥಳೀಯ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕೊಳದ ಮೇಲ್ಭಾಗದ ಗೋಡೆಗಳ ಮೇಲೆ ಉಬ್ಬುಶಿಲ್ಪಗಳ ಕೆತ್ತನೆಗಳಿವೆ.

ಮಲ್ಲಿಕರ್ಜುನ ಮುರುಘರಾಜೇಂದ್ರ ಸಮಾಧಿ

ಇದು ಚಿತ್ರದುರ್ಗದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳ ಸಮಾಧಿ ಸ್ಥಳವಾಗಿದೆ. ಮಲ್ಲಿಕಾರ್ಜುನ ಸ್ವಾಮೀಜಿಗಳು ಸುಮಾರು 30 ವರ್ಷಗಳ ಸುದೀರ್ಘ ಕಾಲ ಮುರುಘಾ ಮಠದ ಪೀಠಾಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಮಾಜ ನಿರ್ಮಾಣದ ಕಾರ್ಯವನ್ನು ನೆರವೇರಿಸಿದರು.

ಶ್ರೀಗಳು ಹಲವು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು. ಅವರು ಐಕ್ಯಗೊಂಡ ಸ್ಥಳವಾಗಿರುವುದರಿಂದ ಇಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದೆ.

ಭೇಟಿ ನೀಡಿ
ಹೊಳಲ್ಕೆರೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section