ಶ್ರೀ ಕಲ್ಬಿಗಿರಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿರುವ ಹೊಯ್ಸಳರ ಕಾಲದಲ್ಲಿ ಸ್ಥಾಪಿತವಾದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಬೆಟ್ಟದ ಮೇಲ್ಭಾಗದಲ್ಲಿದೆ.
ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಾಲಯದ ದೂರಗಳು
- ಬೆಂಗಳೂರು – 340 ಕಿ.ಮೀ
- ದಾವಣಗೆರೆ – 80 ಕಿ.ಮೀ
- ನ್ಯಾಮತಿ – 18 ಕಿ.ಮೀ

ಶ್ರೀ ಕಲ್ಬಿಗಿರಿ ಶ್ರೀರಂಗನಾಥ ಸ್ವಾಮಿಯ ಆಲಯವು ಇತ್ತೀಚೆಗೆ ಆಧುನೀಕರಿಸಲ್ಪಟ್ಟ ಪುರಾತನ ದೇವಾಲಯವಾಗಿದೆ. ಇಲ್ಲಿ ವಿರಾಜಮಾನವಾಗಿರುವ ಅನೇಕ ಪುರಾತನ ಮೂರ್ತಿಗಳು ಅತ್ಯಂತ ಆಕರ್ಷಕವಾಗಿವೆ. ಸುಮಾರು ನಾಲ್ಕು–ಐದು ಶತಮಾನಗಳ ಹಿಂದೆಯೇ ಗುಡ್ಡದ ತುದಿಯಲ್ಲಿ ಇಂತಹ ಭವ್ಯ ದೇವಾಲಯವನ್ನು ನಿರ್ಮಿಸಿದ ರಾಜರ ಶ್ರದ್ಧೆ, ಭಕ್ತಿ ಮತ್ತು ನಂಬಿಕೆ ಅಪಾರವಾಗಿತ್ತು.
ಭೇಟಿ ನೀಡಿ
ಭೇಟಿ ನೀಡಿ



