ಬೂದಿಕೋಟೆ ಅಣೆಕಟ್ಟು ಅಥವಾ ಮಾರ್ಕಂಡೇಯ ಅಣೆಕಟ್ಟು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಸಮೀಪದ ನೂತುವೆ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಅಣೆಕಟ್ಟಾಗಿದೆ. ಈ ಅಣೆಕಟ್ಟು ನುಟುವೆ (ನೂತುವೆ) ಗ್ರಾಮದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. ಇದರ ನಿರ್ಮಾಣ ಕಾರ್ಯವು 1936ರಲ್ಲಿ ಆರಂಭಗೊಂಡು, 1940ರಲ್ಲಿ ಪೂರ್ಣಗೊಂಡಿತು.
ಬೂದಿಕೋಟೆ ಅಣೆಕಟ್ಟಿನ ದೂರಗಳು
- ಬೆಂಗಳೂರು – 78 ಕಿ.ಮೀ
- ಕೋಲಾರ – 32 ಕಿ.ಮೀ
- ಬಂಗಾರಪೇಟೆ – 18 ಕಿ.ಮೀ
- ಬಂಗಾರಪೇಟೆ ರೈಲ್ವೆ ನಿಲ್ದಾಣ – 17 ಕಿ.ಮೀ
- ಕೋಲಾರ ರೈಲ್ವೆ ನಿಲ್ದಾಣ – 33 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 87 ಕಿ.ಮೀ

ಈ ಅಣೆಕಟ್ಟನ್ನು ಆಗಿನ ಕಾಲದಲ್ಲಿ 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ (2023 ರಲ್ಲಿ ₹ 13 ಕೋಟಿ ಅಥವಾ US$ 1.5 ಮಿಲಿಯನ್ಗೆ ಸಮ ).
ಭೇಟಿ ನೀಡಿ





