ಬೋರನಕಣಿವೆ

ಬೋರನಕಣಿವೆ ಜಲಾಶಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಗ್ರಾಮದ ಸಮೀಪದ ಬೋರನಕಣಿವೆ ಪ್ರದೇಶದಲ್ಲಿರುವ ಜಲಾಶಯವಾಗಿದೆ. ಈ ಅಣೆಕಟ್ಟನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ಚಾಮರಾಜೇಂದ್ರ ಒಡೆಯರ್ ನಿರ್ಮಿಸಿದರು. ಆ ಕಾಲದಲ್ಲಿ ದಿವಾನರಾಗಿದ್ದವರು ಕೆ. ಶೇಷಾದ್ರಿ ಅಯ್ಯರ್.

ಅಣೆಕಟ್ಟಿನ ನಿರ್ಮಾಣ ಕಾರ್ಯವು ಕ್ರಿ.ಶ. 1888ರ ಮೇ ತಿಂಗಳಲ್ಲಿ ಪ್ರಾರಂಭವಾಗಿ, 1892ರ ಅಕ್ಟೋಬರ್ ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಯಿತು.

ಬೋರನಕಣಿವೆಯ ದೂರಗಳು

  • ಬೆಂಗಳೂರು – 152 ಕಿ.ಮೀ
  • ತುಮಕೂರು – 84 ಕಿ.ಮೀ
  • ಚಿಕ್ಕನಾಯಕನಹಳ್ಳಿ – 32 ಕಿ.ಮೀ
  • ಬಾಣಸಂದ್ರ ರೈಲ್ವೆ ನಿಲ್ದಾಣ – 55 ಕಿ.ಮೀ

ಬೋರನಕಣಿವೆ ಜಲಾಶಯವು ಎರಡು ಗುಡ್ಡಗಳ ನಡುವೆ ಅಡ್ಡವಾಗಿ ನಿರ್ಮಿಸಲಾದ ಅಣೆಕಟ್ಟಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೃಷ್ಣರಾಜ ಸಾಗರ ಅಣೆಕಟ್ಟುಗಿಂತಲೂ ಮುಂಚೆಯೇ ಈ ಬೋರನಕಣಿವೆ ಜಲಾಶಯ ನಿರ್ಮಾಣಗೊಂಡಿದೆ.

ಈ ಅಣೆಕಟ್ಟು ನಿರ್ಮಾಣದಲ್ಲಿ ಮುಖ್ಯ ಎಂಜಿನಿಯರ್ ಕರ್ನಲ್ ಮೈಕನಿಲ್, ಕಾಂಪೈಲರ್ ಸಿ. ಬವನ್, ಸಹಾಯಕ ಮುಖ್ಯ ಎಂಜಿನಿಯರ್ ಡಬ್ಲ್ಯು. ಮೆಕಚಿನ್ ಯಸ್ಕೊಯಿರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ರಾಘವಲು ನಾಯ್ಡು ಮುಂತಾದವರು ಭಾಗವಹಿಸಿದ್ದರು.

ಈ ಜಲಾಶಯವನ್ನು ಬರ ಪರಿಹಾರ ಕಾಮಗಾರಿಯಾಗಿ, ಅಂದಿನ ಮಹಾರಾಜರ ಆದೇಶದಂತೆ ನಿರ್ಮಿಸಲಾಯಿತು. ಇದರ ನಿರ್ಮಾಣ ವೆಚ್ಚವು ಸುಮಾರು 2,20,000 (ಎರಡು ಲಕ್ಷ ಇಪ್ಪತ್ತು ಸಾವಿರ) ರೂಪಾಯಿಗಳಾಗಿತ್ತು.

ಜಲಾಶಯದ ಮುಂಭಾಗದಲ್ಲಿ ಪುರಾತನ ಕಾಲಭೈರವೇಶ್ವರ ದೇವಸ್ಥಾನವಿದೆ. ಇದರಿಂದಾಗಿ ಈ ಪ್ರದೇಶವನ್ನು ಮೊದಲು “ಭೈರವ ಕಣಿವೆ” ಎಂದು ಕರೆಯಲಾಗುತ್ತಿತ್ತು. ನಂತರ ಬೋರ ಎಂಬ ವ್ಯಕ್ತಿಯ ಮನವಿಯ ಮೇರೆಗೆ ಈ ಅಣೆಕಟ್ಟು ನಿರ್ಮಾಣವಾದ ಕಾರಣ ಕ್ರಮೇಣ “ಬೋರನಕಣಿವೆ” ಎಂಬ ಹೆಸರು ಪ್ರಸಿದ್ಧಿಯಾಯಿತು.

ಭೇಟಿ ನೀಡಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section