ಹತ್ತಿಕುಣಿ ಜಲಾಶಯವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಪ್ರಮುಖ ಜಲಾಶಯವಾಗಿದೆ. ಈ ಜಲಾಶಯದ ಅಣೆಕಟ್ಟಿನ ನಿರ್ಮಾಣ ಕಾರ್ಯವು 1960ರ ದಶಕದಲ್ಲಿ ಆರಂಭವಾಗಿ, 1973ರಲ್ಲಿ ಪೂರ್ಣಗೊಂಡಿತು. ಜಲಾಶಯದ ಸುತ್ತಮುತ್ತ ಸುಮಾರು 1,066.71 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಹಚ್ಚಹಸಿರಿನ ನೈಸರ್ಗಿಕ ಪರಿಸರದಿಂದಾಗಿ ಇದು ಪ್ರವಾಸಿಗರು ಮತ್ತು ಸ್ಥಳೀಯರಿಗೆ ಜನಪ್ರಿಯ ಪ್ರೇಕ್ಷಣೀಯ ತಾಣವಾಗಿದೆ.
ಹತ್ತಿಕುಣಿ ಜಲಾಶಯದ ದೂರಗಳು
- ಬೆಂಗಳೂರು – 507 ಕಿ.ಮೀ
- ಯಾದಗಿರಿ – 18 ಕಿ.ಮೀ
- ಯಾದಗಿರಿ ರೈಲ್ವೆ ನಿಲ್ದಾಣ – 18 ಕಿ.ಮೀ
ಈ ಜಲಾಶಯವು ಯಾದಗಿರಿ ಜಿಲ್ಲೆಯ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿ ಹಾಗೂ ಶಹಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಸುಮಾರು 5,300 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ.
ಯಾದಗಿರಿ
ಭೇಟಿ ನೀಡಿ











