ಶ್ರೀ ಪಾಪನಾಶ ಮಹಾದೇವ ಸ್ವಾಮಿ ದೇವಾಲಯ

ಶ್ರೀ ಪಾಪನಾಶ ಮಹಾದೇವಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನ ಶಿವನಗರ ಬಡಾವಣೆಯಲ್ಲಿ ಇರುವ ಹಿಂದೂ ದೇವರು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ 757 ಕಿ.ಮೀ (NH50 — ಕರ್ನಾಟಕದ ಮೂಲಕ), 683 ಕಿ.ಮೀ (NH44 — ಹೈದರಾಬಾದ್ ಮೂಲಕ) ಮತ್ತು ಬೀದರ್‌ನಿಂದ 5 ಕಿ.ಮೀ ದೂರದಲ್ಲಿದೆ. ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರವಿದೆ.

ದೇವಾಲಯದ ಇತಿಹಾಸ

ಈ ಶಿವ ದೇವಾಲಯದ ಗರ್ಭಗುಡಿಯಲ್ಲಿ ಒಂದು ಬೃಹತ್ ಶಿವಲಿಂಗವಿದೆ. ಈ ದೇವಾಲಯದ ಇತಿಹಾಸವು ತ್ರೇತ್ರಾಯುಗದ ಕಾಲಕ್ಕೆ ಸಂಪರ್ಕ ಹೊಂದಿದೆ. ರಾವಣನ ಸಂಹಾರದ ನಂತರ, ಪ್ರಭು ಶ್ರೀರಾಮಚಂದ್ರನು ಬ್ರಹ್ಮಹತ್ಯೆ ದೋಷ ನಿವಾರಣೆಗೆ ಅಯೋಧ್ಯೆಗೆ ತೆರಳುವ ಮಾರ್ಗದ ಉದ್ದಕ್ಕೂ ಅನೇಕ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದರು. ಈ ಶಿವಲಿಂಗಗಳಲ್ಲಿ ಪಾಪನಾಶ ಶಿವಲಿಂಗವು ವಿಶೇಷ ಮಹತ್ವ ಹೊಂದಿದೆ.

ಶ್ರೀರಾಮಚಂದ್ರನು ಶಿವಭಕ್ತ ಹಾಗೂ ರಾವಣನ ಸಂಹಾರದ ಪಾಪ ನಿವಾರಣೆಗೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಶಿವ ದೇವರಿಗೆ ಅಭಿಷೇಕ ಮಾಡಲು ನೀರು ಇಲ್ಲದ ಕಾರಣ, ಶ್ರೀರಾಮಚಂದ್ರನು ಸ್ವತಃ ಬಾಣದಿಂದ ಕೊಳ (ತೀರ್ಥ) ನಿರ್ಮಿಸಿದರು. ಈ ಅದ್ಭುತ ತೀರ್ಥವೇ ಪಾಪನಾಶ ತೀರ್ಥ. ಭಕ್ತರು ಈ ಕೊಳದಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಪ್ರವೇಶಿಸುತ್ತಾರೆ. ವಿಶೇಷವಾಗಿ, ಈ ತೀರ್ಥವು ಬೇಸಿಗೆ ಕಾಲದಲ್ಲೂ ಬತ್ತುವುದಿಲ್ಲ.

ಪಾಪನಾಶ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರ ಪ್ರತಿಷ್ಠಾಪಿಸಿದ ದೊಡ್ಡ ಶಿವಲಿಂಗವಿದ್ದು, ಗರ್ಭಗುಡಿಯ ಹೊರಗೆ ಮೂರು ಸಣ್ಣ ಶಿವಲಿಂಗಗಳಿವೆ. ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಭೇಟಿ ನೀಡಿ
ಬೀದರ್ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section