ಹೇಮಗಿರಿ ಜಲಪಾತ ಮತ್ತು ಹೇಮಗಿರಿ ಬೆಟ್ಟವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನೆಲೆಗೊಂಡಿರುವ ರಮಣೀಯ ಪ್ರವಾಸಿ ತಾಣವಾಗಿದೆ.
ಹೇಮಗಿರಿ ಜಲಪಾತವು ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಿರು ಅಣೆಕಟ್ಟಿನಿಂದ ಉಂಟಾಗಿರುವ ಜಲಪಾತವಾಗಿದೆ. ಕ್ರಿ.ಶ. 1880ರಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಸುಮಾರು 415 ಮೀಟರ್ ಉದ್ದದ ಅಣೆಕಟ್ಟನ್ನು ಇಲ್ಲಿ ನಿರ್ಮಿಸಲಾಯಿತು. ಈ ಅಣೆಕಟ್ಟನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ ಹಾಗೂ ಕೃಷಿಭೂಮಿಗಳಿಗೆ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾಗಿದೆ.
ಕಿಕ್ಕೇರಿ ಬ್ರಹ್ಮೇಶ್ವರ ದೇವಾಲಯದ ದೂರಗಳು
- ಬೆಂಗಳೂರು – 165 ಕಿ.ಮೀ
- ಮಂಡ್ಯ – 67 ಕಿ.ಮೀ
- ಕೆ.ಆರ್. ಪೇಟೆ – 10 ಕಿ.ಮೀ
- ಬೀರವಳ್ಳಿ ರೈಲು ನಿಲ್ದಾಣ – 5 ಕಿ.ಮೀ
ಹೇಮಗಿರಿ ಬೆಟ್ಟವು ಹೇಮಾವತಿ ನದಿಯಿಂದ ಸುತ್ತುವರೆದಿರುವ ಸಣ್ಣ ಬೆಟ್ಟವಾಗಿದ್ದು, ಅದರಿಂದಲೇ ಇದಕ್ಕೆ “ಹೇಮಗಿರಿ” ಎಂಬ ಹೆಸರು ಬಂದಿದೆ. ಬೆಟ್ಟದ ಮೇಲಿರುವ ವೆಂಕಟರಮಣಸ್ವಾಮಿ ದೇವಾಲಯವು ಆಧುನಿಕ ನಿರ್ಮಾಣವಾಗಿದ್ದು, ವಿಷ್ಣುವು ತನ್ನ ನಿವಾಸವಾದ ವೈಕುಂಠದಿಂದ ಆಗಾಗ್ಗೆ ಭೇಟಿ ನೀಡುವ ಪವಿತ್ರ ಸ್ಥಳವೆಂದು ದಂತಕಥೆಗಳು ಹೇಳುತ್ತವೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ವೆಂಕಟರಮಣಸ್ವಾಮಿಗೆ ರಥೋತ್ಸವ ಮತ್ತು ತೆಪ್ಪೋತ್ಸವವನ್ನು ಆಚರಿಸಲಾಗುತ್ತದೆ.
ಸುಮಾರು ಒಂದೂವರೆ ಚದರ ಮೈಲಿ ವಿಸ್ತೀರ್ಣದ ವಿಶಾಲ ಮೈದಾನದಲ್ಲಿ ನಡೆಯುವ ಹೋರಿ ಮೇಳ (ದನಗಳ ಜಾತ್ರೆ)ಗಾಗಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಉತ್ಸವ ಪ್ರಾರಂಭವಾಗುವ ಸುಮಾರು 15 ದಿನಗಳ ಮುಂಚೆಯೇ ಇಲ್ಲಿ ಆಗಮಿಸುತ್ತಾರೆ. ಎಲ್ಲಾ ಅಂಶಗಳಿಂದ ಈ ಜಾತ್ರೆಯು ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಿದ್ದು, ನೋಡಲು ಅತ್ಯಂತ ಮನಮೋಹಕವಾಗಿದೆ. ಈ ಸ್ಥಳವು ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ತಾಣವಾಗಿದೆ.
ಭೇಟಿ ನೀಡಿ
