ಚನ್ನರಾಯನ ದುರ್ಗ ಕೋಟೆ

ಚನ್ನರಾಯನದುರ್ಗ ಕೋಟೆವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಐತಿಹಾಸಿಕ ಬೆಟ್ಟದ ಕೋಟೆಯಾಗಿದೆ. ಈ ಕೋಟೆಯನ್ನು ಮಧುಗಿರಿಯ ಪಾಳೇಗಾರ ವಂಶಕ್ಕೆ ಸೇರಿದ ಚಿಕ್ಕಪ್ಪ ಗೌಡ ನಿರ್ಮಿಸಿದರು. ಈ ಕೋಟೆಯು ಸಮುದ್ರಮಟ್ಟದಿಂದ ಸುಮಾರು 3,734 ಅಡಿ ಎತ್ತರದಲ್ಲಿದೆ.

ಚನ್ನರಾಯನ ದುರ್ಗ ಕೋಟೆಯ ದೂರಗಳು

  • ಬೆಂಗಳೂರು – 112 ಕಿ.ಮೀ
  • ತುಮಕೂರು – 40 ಕಿ.ಮೀ
  • ಕೊರಟಗೆರೆ – 13 ಕಿ.ಮೀ
  • ಮಧುಗಿರಿ – 10 ಕಿ.ಮೀ
  • ಗೌರಿಬಿದನೂರು ರೈಲ್ವೆ ನಿಲ್ದಾಣ – 45 ಕಿ.ಮೀ

ಚನ್ನನಾರಾಯಣ ದುರ್ಗವನ್ನು ಮಧುಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಡಳಿತಗಾರರಾದ ಪಾಳೆಗಾರ ಚಿಕ್ಕಪ್ಪ ಗೌಡ ನಿರ್ಮಿಸಿದನು. ಈ ಏಳು ಸುತ್ತಿನ ಕೋಟೆಯನ್ನು ತನ್ನ ಅಕಾಲಿಕವಾಗಿ ನಿಧನರಾದ ಮಗ ಚನ್ನಪ್ಪ ಗೌಡನ ನೆನಪಿಗಾಗಿ ನಿರ್ಮಿಸಿದನೆಂದು ಹೇಳಲಾಗುತ್ತದೆ.

ಕೋಟೆಯೊಳಗೆ ಕೆಲವು ದೇವಾಲಯಗಳು ಮತ್ತು ಹಳೆಯ ಕಟ್ಟಡಗಳ ಅವಶೇಷಗಳು ಕಂಡುಬರುತ್ತವೆ. ಮಧ್ಯಕಾಲೀನ ಯುಗದಲ್ಲಿ ಚನ್ನನಾರಾಯಣ ದುರ್ಗವು ಪ್ರಮುಖ ಕಾರ್ಯತಂತ್ರದ ಕೋಟೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲು ಅನೇಕ ಯುದ್ಧಗಳು ನಡೆದಿವೆ. ಕೋಟೆಯ ಮೇಲ್ಭಾಗದಲ್ಲಿ ವಿಶಾಲವಾದ ನೀರಿನ ಕೊಳ (ದೊಣೆ) ಸಹ ಇದೆ.

ಇತಿಹಾಸ

ಇಮ್ಮಡಿ ಚಿಕ್ಕಪ್ಪ ಗೌಡರಿಗೆ ಮೂರು ಗಂಡು ಮಕ್ಕಳು ಇದ್ದರು. ಮೊದಲ ಮಗ ತೋಟದೇಂದ್ರ ಅವರು ಅರವೇಕೋಟ ಯುದ್ಧದಲ್ಲಿ ಮೃತರಾದರು. ಎರಡನೇ ಮಗ ಚೆನ್ನಪ್ಪ ಗೌಡರು ಅಕಾಲಿಕವಾಗಿ ನಿಧನರಾದರು. ನಂತರ ಮೂರನೇ ಮಗ ಸಪ್ಪೇಂದ್ರರು ಆಡಳಿತವನ್ನು ವಹಿಸಿಕೊಂಡರು.

ಸಪ್ಪೇಂದ್ರರಿಗೆ ಮೂರು ಗಂಡು ಮಕ್ಕಳು ಇದ್ದರು—ಮೊದಲ ಮಗ ಸಂಗಪ್ಪ ಗೌಡರು, ಎರಡನೇ ಮಗ ಹಿರೇತೋಟಪ್ಪ ಗೌಡರು ಮತ್ತು ಮೂರನೇ ಮಗ ಕಾಳಚಿಕ್ಕಪ್ಪ ಗೌಡರು. ಇವರಿಗೆ ಕ್ರಮವಾಗಿ ಮಧುಗಿರಿ, ಮಿಡಿಗೇಶಿ ಮತ್ತು ಚನ್ನರಾಯನ ದುರ್ಗ ಪ್ರದೇಶಗಳನ್ನು ಹಂಚಿಕೊಡಲಾಯಿತು.

ಮುಂದೆ ಕಾಳಚಿಕ್ಕಪ್ಪ ಗೌಡರಿಗೆ ಇಬ್ಬರು ಗಂಡು ಮಕ್ಕಳು ಇದ್ದರು—ರಾಮಪ್ಪ ಗೌಡರು ಮತ್ತು ತಿಮ್ಮಪ್ಪ ಗೌಡರು. ಇವರ ನಡುವೆ ಅಧಿಕಾರಕ್ಕಾಗಿ ದಾಯಾದಿ ಕಲಹ ಪ್ರಾರಂಭವಾಯಿತು. ಈ ಕಲಹದ ಹಿನ್ನೆಲೆಯಲ್ಲಿ ತಿಮ್ಮಪ್ಪ ಗೌಡರು ಅಂದಿನ ಮೈಸೂರು ಮಹಾರಾಜರಾದ ಚಿಕ್ಕದೇವರಾಯ ಒಡೆಯರು ಅವರ ಬಳಿ ಸಹಾಯ ಕೋರಿದರು.

ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ದಳವಾಯಿ ದೇವರಾಜಯ್ಯನವರು ಮೈಸೂರಿನ ಸೇನೆಯೊಂದಿಗೆ ಮಹಾನಾಡಿನ ಮೇಲೆ ದಾಳಿ ನಡೆಸಿ ಮಧುಗಿರಿ ಮತ್ತು ಚನ್ನರಾಯನ ದುರ್ಗವನ್ನು ವಶಪಡಿಸಿಕೊಂಡರು. ಹೀಗೆ ದಾಯಾದಿ ಕಲಹದ ಪರಿಣಾಮವಾಗಿ ಮಹಾನಾಡಿನ ಆಡಳಿತವನ್ನು ಕಳೆದುಕೊಳ್ಳಲಾಯಿತು.

ಭೇಟಿ ನೀಡಿ
ಕೊರಟಗೆರೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section