ಭಸ್ಮಂಗಿ ಕೋಟೆ

ಭಸ್ಮಂಗಿ ಕೋಟೆyಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಿತ್ತಗಲಿ ಗ್ರಾಮದ ಸಮೀಪದ ಭಸ್ಮಂಗಿ ಹಳ್ಳಿಯಲ್ಲಿ ಇರುವ 17ನೇ ಶತಮಾನದಲ್ಲಿ ನಿರ್ಮಿಸಲಾದ ಕೋಟೆಯಾಗಿದೆ. ಈ ಕೋಟೆಯನ್ನು ಸ್ಥಳೀಯ ಆಡಳಿತಗಾರ ಬೂದಿ ಬಸವಪ್ಪ ನಾಯಕ ಮಣ್ಣಿನಿಂದ ನಿರ್ಮಿಸಿದನು.

ಭಸ್ಮಂಗಿ ಕೋಟೆಯ ದೂರಗಳು

  • ಬೆಂಗಳೂರು – 131 ಕಿ.ಮೀ
  • ತುಮಕೂರು – 63 ಕಿ.ಮೀ
  • ಮಧುಗಿರಿ – 32 ಕಿ.ಮೀ
  • ತುಮಕೂರು ರೈಲ್ವೆ ನಿಲ್ದಾಣ – 64 ಕಿ.ಮೀ

ಇತಿಹಾಸ

ಭಸ್ಮಂಗಿ ಕೋಟೆ ಕುರಿತು ಇತಿಹಾಸದಲ್ಲಿ ಹಲವು ಉಲ್ಲೇಖಗಳಿವೆ. ಮೊದಲಿಗೆ ಈ ಕೋಟೆಯನ್ನು ಬೂದಿಬಸವಪ್ಪ ನಾಯಕನು ಮಣ್ಣಿನಿಂದ ನಿರ್ಮಿಸಿದ್ದನು. ನಂತರ ಕ್ರಿ.ಶ. 1768ರಲ್ಲಿ ಹೈದರ್ ಅಲಿ ಈ ಪ್ರದೇಶವನ್ನು ವಶಪಡಿಸಿಕೊಂಡನು. ಬೂದಿಬಸವಪ್ಪ ನಾಯಕ ನಿರ್ಮಿಸಿದ್ದ ಮಣ್ಣಿನ ಕೋಟೆಯನ್ನು ಕೆಡವಿ, ಇಟ್ಟಿಗೆ ಮತ್ತು ಕಲ್ಲಿನಿಂದ ಹೊಸ ಕೋಟೆ ಹಾಗೂ ಅರಮನೆಗಳನ್ನು ನಿರ್ಮಿಸಲಾಯಿತು.

ಮಧುಗಿರಿಯ ವಾಯವ್ಯ ಭಾಗದಲ್ಲಿರುವ ಸಿದ್ಧಾಪುರದಲ್ಲಿ ಒಂದು ಹಳೆಯ ಕೋಟೆಯಿದೆ. ಅಲ್ಲಿನ ಶಾಸನದ ಪ್ರಕಾರ, ಬಿಜವರದ ಮಹಾನಾಡುಪ್ರಭು ಚಿಕ್ಕಪ್ಪ ಗೌಡನು ಕ್ರಿ.ಶ. 1593ರಲ್ಲಿ ಭಸ್ಮಂಗಿ ಕೋಟೆಯನ್ನು ನಿರ್ಮಿಸಿದನೆಂದು ತಿಳಿದುಬರುತ್ತದೆ.

ಭಸ್ಮಂಗಿ ಕೋಟೆ ಬಿಜವರದ ಸಿದ್ಧಲಿಂಗ ಭೂಪಾಲ ಮತ್ತು ಮುಮ್ಮಡಿ ಚಿಕ್ಕಭೂಪಾಲ ಎಂಬ ಪ್ರಸಿದ್ಧ ದೊರೆಗಳ ಆಡಳಿತ ಕೇಂದ್ರವಾಗಿತ್ತು. ಮುಮ್ಮಡಿ ಚಿಕ್ಕಭೂಪಾಲನು ಕನ್ನಡ ಮತ್ತು ಸಂಸ್ಕೃತ ಭಾಷೆಗಳಿಗೆ ಪ್ರೋತ್ಸಾಹ ನೀಡಿದನು. ಅಲ್ಲದೆ, ಆತ “ಅಭಿನವ ಭಾರತ ಸೌರಸಂಗ್ರಹ” ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದ್ದನು.

17ನೇ ಶತಮಾನದ ಅಂತ್ಯದಲ್ಲಿ ಚಿಕ್ಕದೇವರಾಜ ಒಡೆಯರ್ ಈ ಕೋಟೆಯನ್ನು ವಶಪಡಿಸಿಕೊಂಡನು. ಹಿಂದಿನ ಕಾಲದಲ್ಲಿ ಇದು ಪಾಳೇಪಟ್ಟಿನ ಪ್ರಮುಖ ಕೇಂದ್ರವಾಗಿತ್ತು.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section