ರಂಗರಾಯನ ದೊಡ್ಡಿ ಕೆರೆ ದೋಣಿ ವಿಹಾರ

ಬೋಳಪ್ಪನಹಳ್ಳಿಯು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಒಂದು ಗ್ರಾಮವಾಗಿದೆ. ಈ ಗ್ರಾಮದಲ್ಲಿರುವ ರಂಗರಾಯನ ದೊಡ್ಡಿ ಕೆರೆಯು ದೋಣಿ ವಿಹಾರ ಹಾಗೂ ಸಣ್ಣ ಪ್ರಮಾಣದ ಜಲಚಟುವಟಿಕೆಗಳಿಗೆ ಜನಪ್ರಿಯ ತಾಣವಾಗಿದೆ. ಕೆರೆಯ ಪಕ್ಕದಲ್ಲಿರುವ ಕಲ್ಲಿನ ಬೆಟ್ಟವು ಸಣ್ಣ ಪ್ರಮಾಣದ ಚಾರಣಕ್ಕೆ ಸೂಕ್ತವಾಗಿದ್ದು, ಚಾರಣದ ನಂತರ ಬೆಟ್ಟದ ತುದಿಯಿಂದ ಸುತ್ತಮುತ್ತಲಿನ ಪ್ರಕೃತಿಯ ಅದ್ಭುತ ನೋಟವನ್ನು ವೀಕ್ಷಿಸಬಹುದು.

ರಂಗರಾಯನ ದೊಡ್ಡಿ ಕೆರೆ ದೋಣಿ ವಿಹಾರದ ದೂರಗಳು

  • ಬೆಂಗಳೂರು – 54 ಕಿ.ಮೀ
  • ರಾಮನಗರ – 3 ಕಿ.ಮೀ
  • ರಾಮನಗರ ರೈಲ್ವೆ ನಿಲ್ದಾಣ – 3 ಕಿ.ಮೀ

ಈ ಕೆರೆಯ ಪಕ್ಕದಲ್ಲಿ ಸುಂದರವಾದ ಉದ್ಯಾನವನವಿದೆ. ವಾರಾಂತ್ಯದ ವಿಹಾರಕ್ಕೆ ಇದು ಅತ್ಯುತ್ತಮ ಸ್ಥಳವಾಗಿದೆ. ಕೆರೆ ಮತ್ತು ಅದರ ಪಕ್ಕದಲ್ಲಿರುವ ಬೃಹತ್ ಬಂಡೆಯ ಸಮೀಪ ನಿರ್ಮಿಸಲಾಗಿರುವ ಈ ಪುಟ್ಟ ಉದ್ಯಾನವನವು ಸ್ಥಳದ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ದೋಣಿ ವಿಹಾರ ದರ

ದೋಣಿಸಮಯದರ
ಪ್ಯಾಡಲ್ ದೋಣಿ20 ನಿಮಿಷಗಳುRs.20/-ವಯಸ್ಕರು
ಪ್ಯಾಡಲ್ ದೋಣಿ20 ನಿಮಿಷಗಳುRs.10/-ಮಕ್ಕಳು
ಮೋಟಾರು ದೋಣಿ1 ಸುತ್ತುRs.20/-ವಯಸ್ಕರು
ಮೋಟಾರು ದೋಣಿ1 ಸುತ್ತುRs.10/-ಮಕ್ಕಳು

ದೋಣಿ ವಿಹಾರ ಸಮಯ

ಬೆಳಿಗ್ಗೆ 8:00 ರಿಂದ ಸಂಜೆ 6:00 ವರೆಗೆ.

ಭೇಟಿ ನೀಡಿ
ರಾಮನಗರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section