ಜಾನಪದ ಲೋಕವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬೆಂಗಳೂರು–ಮೈಸೂರು ಹೆದ್ದಾರಿಯ ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆ ಅರಣ್ಯ ವ್ಯಾಪ್ತಿಯಲ್ಲಿ, ಕರ್ನಾಟಕದ ಜನಪದ ಕಲಾ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಉದ್ದೇಶದಿಂದ ಸ್ಥಾಪಿಸಲಾದ ಜನಪದ ಸಂಸ್ಕೃತಿ ಮ್ಯೂಸಿಯಂ ಆಗಿದೆ. ಎಚ್. ಎಲ್. ನಾಗೇಗೌಡರು 1979ರಲ್ಲಿ ಈ ಕಲಾಕೇಂದ್ರವನ್ನು ಸ್ಥಾಪಿಸಿದರು.
ಜಾನಪದ ಲೋಕವು ಬೆಂಗಳೂರಿನಿಂದ 57 ಕಿ.ಮೀ ಮತ್ತು ರಾಮನಗರದಿಂದ ಕೇವಲ 4 ಕಿ.ಮೀ ದೂರದಲ್ಲಿದೆ.
ಕರ್ನಾಟಕದ ಗ್ರಾಮೀಣ ಪರಿಸರದ ಭೂತಕಾಲದ ನಾಡಿಮಿಡಿತವನ್ನು ಜೀವಂತವಾಗಿಡುವ ಉದ್ದೇಶದಿಂದ ಜಾನಪದ ಲೋಕವನ್ನು ಸುಂದರವಾಗಿ ಮರುಸೃಜಿಸಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ನಿರ್ಮಿತವಾಗಿರುವ ಈ ಲೋಕವು ರಾಜ್ಯದ ಜನಪದ ಪರಂಪರೆಯ ಜೀವಂತ ಮೆರವಣಿಗೆಯಾಗಿದೆ.
ಪ್ರವೇಶ ದ್ವಾರದ ಬಳಿ, ಜಾನಪದ ಲೋಕದ ಸ್ಥಾಪಕರಾದ ನಾಡೋಜ ದಿ. ನಾಗೇಗೌಡರ ಭವ್ಯ ಶಿಲ್ಪವು ನಿಲುಕಿದ್ದು, ಅದು ಭೇಟಿದಾರರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ. ಈ ಶಿಲ್ಪದ ಹಿಂಭಾಗದಲ್ಲಿರುವ ಲೋಕಮಾತಾ ವಸ್ತು ಸಂಗ್ರಹಾಲಯದಲ್ಲಿ, ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಬಳಸಿದ ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿದೆ.
ಪ್ರವೇಶ ದ್ವಾರದ ಬಳಿ ಜಾನಪದ ಲೋಕದ ಸ್ಥಾಪಕರಾದ ನಾಡೋಜ ಡಾ. ಎಚ್. ಎಲ್. ನಾಗೇಗೌಡರ ಭವ್ಯ ಶಿಲ್ಪವು ನಿಲುಕಿದ್ದು, ಅದು ಭೇಟಿದಾರರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ. ಈ ಶಿಲ್ಪದ ಹಿಂಭಾಗದಲ್ಲಿರುವ ಲೋಕಮಾತಾ ವಸ್ತುಸಂಗ್ರಹಾಲಯದಲ್ಲಿ, ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಬಳಸಿದ ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿದೆ.
ಜನಪದ ಲೋಕದ ಪ್ರಮುಖ ಆಕರ್ಷಣೆಗಳು ಮತ್ತು ವಿಭಾಗಗಳು:
- ಚಿತ್ರಕುಟೀರ (Video Scope): ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳು ಹಾಗೂ ದೃಶ್ಯಪ್ರದರ್ಶನಗಳಿಗಾಗಿ ಇಲ್ಲಿ ಪ್ರತ್ಯೇಕ ಸಭಾಂಗಣವಿದೆ. ಇದು ಲೋಕಮಾತಾ ಮಂದಿರದ ಸಮೀಪದಲ್ಲಿದೆ.
- ಲೋಕಮಂದಿರ: ಗ್ರಾಮೀಣ ಕಲೆಗಳು ಮತ್ತು ಕಲಾ ಪ್ರದರ್ಶನಗಳಿಗೆ ಬಳಸುವ ವಿವಿಧ ವಾದ್ಯಗಳು, ಹಳ್ಳಿಗರು ಬಳಸುವ ಸರಕುಸಾಧನಗಳು, ತೊಗಲು ಗೊಂಬೆ, ಯಕ್ಷಗಾನ ಹಾಗೂ ಬಯಲಾಟದ ಗೊಂಬೆಗಳು, ಹಳೆಯ ನಾಣ್ಯಗಳು, ಅಳತೆಮಾಪಕಗಳು ಮೊದಲಾದವು ಇಲ್ಲಿನ ಪ್ರಮುಖ ಸಂಗ್ರಹ ವಸ್ತುಗಳಾಗಿವೆ.
- ಅಯ್ಯಂಗಾರರ ಮಾಳ: ಹಳೆಯ ಕಾಲದ ಶೈಲಿಯಲ್ಲಿ ನಿರ್ಮಿತ ಮನೆ ಮಾದರಿ, ಅಯ್ಯಂಗಾರ್ ಸಮುದಾಯದ ಜೀವನಶೈಲಿಯನ್ನು ಪ್ರತಿಬಿಂಬಿಸುವ ವಿನ್ಯಾಸವಾಗಿದೆ.
- ಶಿಲ್ಪಮಾಳ: ಕಲ್ಲು ಹಾಗೂ ಮರದಲ್ಲಿ ಕೆತ್ತಿದ ವಿವಿಧ ಜನಪದ ಶಿಲ್ಪಗಳ ಪ್ರದರ್ಶನ.
- ಕುಂಬಾರಿಕೆ ವಿಭಾಗ: ಹಳ್ಳಿಗಳಲ್ಲಿ ಉಪಯೋಗಿಸುವ ಮಡಿಕೆ, ಹಂಡೆ, ಪಾನಪಾತ್ರೆ ಮೊದಲಾದ ಮಣ್ಣಿನ ಸಾಮಗ್ರಿಗಳ ತಯಾರಿ ಹಾಗೂ ಪ್ರದರ್ಶನ.
- ಗೊಂಬೆ ತಯಾರಿಕೆ ವಿಭಾಗ: ವಿವಿಧ ಮಾದರಿಗಳ ತೊಗಲು ಗೊಂಬೆಗಳು ಹಾಗೂ ಮಣ್ಣು ಮತ್ತು ಮರದಿಂದ ತಯಾರಿಸಲಾದ ಜನಪದ ಗೊಂಬೆಗಳ ಪ್ರದರ್ಶನ.
ಜಾನಪದ ಲೋಕದ ಪರಿಷತ್ತಿನ ಉದ್ದೇಶಗಳು
- ಗ್ರಾಮೀಣ ಜನರ ವೇಷಭೂಷಣಗಳು, ಅವರು ಉಪಯೋಗಿಸುತ್ತಿದ್ದ ವಸ್ತುಗಳು ಹಾಗೂ ಕೃಷಿಗೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ.
- ಗ್ರಾಮೀಣ ಜನರ ಗಾದೆಗಳು, ಕಥೆಗಳು ಮತ್ತು ಬಯಲಾಟ — ಇವುಗಳಿಗೆ ಸಂಬಂಧಿಸಿದಂತೆ ಜಾನಪದ ಪತ್ರಿಕೆಗಳ ಪ್ರಕಟಣೆ.
- ಜಾನಪದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವುದು; ಜಾನಪದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದು; ಶಾಲಾ ಮತ್ತು ಕಾಲೇಜುಗಳಲ್ಲಿ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ನೀಡುವುದು.
- ಜಾನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು; ಅಲ್ಲಲ್ಲಿ ಜಾನಪದ ಕಲೆಗಳ ಪ್ರದರ್ಶನಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವುದು.
- ಹಳ್ಳಿಯ ಜನರ ಮದುವೆ, ಜಾತ್ರೆ, ತೇರು, ಹಬ್ಬ, ಸಂಪ್ರದಾಯಗಳು ಮತ್ತು ಅವರ ಜೀವನಶೈಲಿಯನ್ನು ಸಾಕ್ಷ್ಯಚಿತ್ರಗಳ ತಯಾರಿಕೆಯ ಮೂಲಕ ಜೀವಂತವಾಗಿಡುವುದು.
- ಜನಪದ ಸ್ಪರ್ಧೆಗಳು ಹಾಗೂ ಕಲಾ ಮೇಳಗಳನ್ನು ಆಯೋಜಿಸುವುದು.
- ಜಾನಪದ ಗೀತೆಗಳು, ಬಯಲಾಟ, ಡೊಳ್ಳುಕುಣಿತಗಳನ್ನು ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಪ್ರಸಾರವಾಗಲು ಅನುಕೂಲವಾಗುವಂತೆ ಕಲಾವಿದರಿಗೆ ತರಬೇತಿ ನೀಡುವುದು.
- ಜಾನಪದ ಕಲೆಗಳನ್ನು ಕಲಿಸಲು ಒಂದು ಕಲಾಶಾಲೆಯನ್ನು ಆರಂಭಿಸುವುದು.
- ಈ ಎಲ್ಲ ಕಾರಣಗಳಿಂದ, ಬೆಂಗಳೂರಿನಲ್ಲಿ ಜಾನಪದ ಲೋಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
ತ್ರೈವಾರ್ಷಿಕ ಜಾನಪದ ಯೋಜನೆ
ಜಾನಪದ ಲೋಕವು ತ್ರೈವಾರ್ಷಿಕ ಜಾನಪದ ಯೋಜನೆಯನ್ನು ರೂಪಿಸಿದ್ದು, ಮೂರು ಹಂತಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದೆ.
ತ್ರೈವಾರ್ಷಿಕ ಯೋಜನೆಯ ವಿವರಗಳು:
- ಜಾನಪದ ಸಂಗೀತ ತರಬೇತಿ
- ಜಾನಪದ ರಂಗಭೂಮಿ ತರಬೇತಿ
- ಜಾನಪದ ಮಾಹಿತಿ ಕೇಂದ್ರ
- ಜಾನಪದ ಕಲೆಗಳ ತರಬೇತಿ
- ಜಾನಪದ ಕ್ರೀಡೆಗಳು
- ಜಾನಪದ ಕಾರ್ಯಾಗಾರಗಳು
- ಜಾನಪದ ಕಲಾವಿದರ ಗ್ಯಾಲರಿ ನಿರ್ಮಾಣ
- ಜಾನಪದ ಪುಸ್ತಕ ಸಂಗ್ರಹಾಲಯ
- ಬುಡಕಟ್ಟು ಜನಾಂಗಗಳ ಕಲೆಗಳ ಸಂರಕ್ಷಣೆ ಮತ್ತು ತರಬೇತಿ
ಸಮಯ
ಜನಪದ ಲೋಕವು ಬುಧವಾರದಿಂದ ಸೋಮವಾರದವರೆಗೆ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ. ಪ್ರತಿ ಮಂಗಳವಾರ ರಜಾದಿನವಾಗಿರುತ್ತದೆ.
| ಪ್ರವೇಶ ಶುಲ್ಕ | |
| ಹಿರಿಯರಿಗೆ | RS.100/- |
| ವಿದೇಶಿಯರಿಗೆ | Rs.200/- |
| 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ | RS.50/- |
| ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್ಗಳು | |
| 12 ವರ್ಷ ಮೇಲ್ಪಟ್ಟ ಮಕ್ಕಳಿಗೆ | ರೂ.80/- (ಶಾಲಾ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು) |
| 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶಾಲಾ ಪ್ಯಾಕೇಜ್ಗಳು ಬರುತ್ತವೆ | Rs.40/- |
| ಶಾಲಾ ಪ್ಯಾಕೇಜ್ನಲ್ಲಿ ಶಾಲಾ ಮಕ್ಕಳೊಂದಿಗೆ ಬರುವ ಶಿಕ್ಷಕರು | RS.50/- |
| ಇತರೆ ಶುಲ್ಕಗಳು | |
| ಸ್ಟಿಲ್ ಕ್ಯಾಮೆರಾ + ವಿಡಿಯೋ ಕ್ಯಾಮೆರಾ | RS.590/- + GST |
| ಪೂರ್ವ-ವಿವಾಹ | Rs.5900/- + GST |
| ಬೇಬಿ ಶೂಟ್ | RS.1000/- + GST |
| ಮಾಡೆಲಿಂಗ್ ಶೂಟ್ | Rs.5900/- + GST |
| ಚಲನಚಿತ್ರ ಶೂಟಿಂಗ್ | Rs.25000/- + GST |
| ಟಿವಿ ಧಾರಾವಾಹಿ | Rs.20000/- + GST |
ವಿಳಾಸ
ರಾಜ್ಯ ಹೆದ್ದಾರಿ 17, P722+6XW, ದೊಡ್ಡಮಣ್ಣುಗುಡ್ಡೆ ಅರಣ್ಯ, ರಾಮನಗರ, ಬೆಂಗಳೂರು ದಕ್ಷಿಣ, ಕರ್ನಾಟಕ 562159
ಭೇಟಿ ನೀಡಿ








