ಕೂಟಗಲ್ಲು ತಿಮ್ಮಪ್ಪನ ಬೆಟ್ಟ, ಅಥವಾ ಟಿ.ಎಂ. ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಕೂಟಗಲ್ಲು ಗ್ರಾಮದಲ್ಲಿದೆ. ಬೆಟ್ಟದ ಶಿಖರದಲ್ಲಿ ಶ್ರೀ ತಿಮ್ಮಪ್ಪಸ್ವಾಮಿ ದೇವಾಲಯವಿದ್ದು, ಇದು ಭಕ್ತರು ಹಾಗೂ ಚಾರಣ ಪ್ರಿಯರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ.
ಕೂಟಗಲ್ಲು ತಿಮ್ಮಪ್ಪನ ಬೆಟ್ಟದ ದೂರಗಳು
- ಬೆಂಗಳೂರು – 54 ಕಿ.ಮೀ
- ರಾಮನಗರ – 11 ಕಿ.ಮೀ
- ರಾಮನಗರ ರೈಲ್ವೆ ನಿಲ್ದಾಣ – 11 ಕಿ.ಮೀ
ಈ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಬಹುದು ಅಥವಾ ವಾಹನದಲ್ಲಿಯೇ ನೇರವಾಗಿ ಮೇಲ್ಭಾಗವನ್ನು ತಲುಪಬಹುದು. ಬೆಟ್ಟದ ತುದಿಯಿಂದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಮತ್ತು ಮನೋಹರ ದೃಶ್ಯಾವಳಿಗಳನ್ನು ವೀಕ್ಷಿಸಬಹುದು.
ಬೆಟ್ಟದ ವಾಯುವ್ಯ ಭಾಗದಲ್ಲಿ ‘ಕೂಡುಗಲ್ಲು’, ‘ಗಳಗಲ್ಲು’, ‘ಕ್ಯಾತನಕಲ್ಲು’, ‘ಮಡಿವಾಳೆ ಕಲ್ಲು’ ಅಥವಾ ‘ಅಗಸನ ಕಲ್ಲು’ ಎಂದು ಕರೆಯಲ್ಪಡುವ ಮೂರು ಬೃಹತ್ ಬಂಡೆಗಳು ಒಂದಕ್ಕೊಂದು ಹೊಂದಿಕೊಂಡಂತೆ ನಿಂತಿವೆ.
ಭೇಟಿ ನೀಡಿ








