ಮುತ್ತೂರಾಯಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಬೆಟ್ಟಹಳ್ಳಿ ಕಾವಲು ಗ್ರಾಮದಲ್ಲಿದೆ. ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಅನುಭವಿಸಲು ಇಷ್ಟಪಡುವವರಿಗೆ, ಬೆಟ್ಟವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಕಾರನ್ನು ವ್ಯೂ ಪಾಯಿಂಟ್ ವರೆಗೆ ತಲುಪಬಹುದು, ಆದರೆ ಕನಿಷ್ಠ ಟ್ರಕ್ಕಿಂಗ್ ಅನುಭವವನ್ನು ಪ್ರಯತ್ನಿಸಲು ಬಯಸುವವರಿಗೆ ಈ ಸ್ಥಳವು ಒಂದು ಆಯ್ಕೆಯಾಗಿದೆ.
ಈ ಬೆಟ್ಟವು ಬೆಂಗಳೂರಿಂದ 42 ಕಿ.ಮೀ, ಬೆಂಗಳೂರು ದಕ್ಷಿಣ (ರಾಮನಗರ) ದಿಂದ 40 ಕಿ.ಮೀ ಮತ್ತು ಕನಕಪುರ ದಿಂದ 29 ಕಿ.ಮೀ ದೂರದಲ್ಲಿದೆ. ಹಾಗೂ ಹಾರೋಹಳ್ಳಿ ಮತ್ತು ಕಗ್ಗಲೀಪುರದಿಂದ 15 ಕಿ.ಮೀ ದೂರದಲ್ಲಿದೆ.
ಬೆಟ್ಟದ ತುದಿಯವರೆಗೆ ಚಾರಣ ಮಾಡಬಹುದು ಅಥವಾ ನಿಮ್ಮ ವಾಹನದಲ್ಲಿ ಹೋಗಬಹುದು. ರಸ್ತೆಯ ಮೂಲಕ ಚಾರಣ ಪ್ರಾರಂಭದ ಸ್ಥಳದಿಂದ ಬೆಟ್ಟದ ತುದಿಯವರೆಗೆ ನಡೆದುಕೊಂಡು ಕೂಡ ಹೋಗಬಹುದು. ಬೆಟ್ಟದ ಮೇಲೆ ಮುತ್ತುರಾಯ (ಆಂಜನೇಯ) ದೇವಾಲಯವಿದೆ.
ಭೇಟಿ ನೀಡಿ





