ಶ್ರೀ ಸಂಜೀವರಾಯ ಸ್ವಾಮಿ ದೇವಾಲಯ

ಶ್ರೀ ಸಂಜೀವರಾಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೂಸಹಳ್ಳಿ ಗ್ರಾಮದಲ್ಲಿ ಇರುವ ಸರಿ ಸಮಾರು 500 ರಿಂದ 600 ವರ್ಷಗಳ ಇತಿಹಾಸ ಉಳ್ಳ, ಶ್ರೀ ವ್ಯಾಸರಾಯರು ಸ್ವತಃ ಸ್ಥಾಪಿಸಿದ ದೇವಾಲಯವಾಗಿದೆ.

ಈ ದೇವಾಲಯವು ಬೆಂಗಳೂರಿಂದ 63 ಕಿ.ಮೀ ಮತ್ತು ರಾಮನಗರದಿಂದ ಸುಮಾರು 10 ಕಿ.ಮೀ ಮತ್ತು ಚನ್ನಪಟ್ಟಣದಿಂದ ಕೇವಲ 04 ಕಿ.ಮೀ ದೂರದಲ್ಲಿದೆ.

ಇತಿಹಾಸ

ಈ ದೇವಾಲಯವು ಸಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವಂತಹ ಕ್ಷೇತ್ರವಾಗಿದೆ. ಈ ದೇವಾಲಯವು ಹಿಂದೆ ದಟ್ಟ ಅರಣ್ಯವಾಗಿ ಇರುತ್ತೆ. ಆ ಒಂದು ಸಂದರ್ಭದಲ್ಲಿ ವ್ಯಾಸರಾಯರು ಒಮ್ಮೆ ತಮ್ಮ ಅನುಷ್ಠಾನವನ್ನು ಮುಗಿಸಿ ವಾಪಸು ಹೋಗುವ ಸಮಯದಲ್ಲಿ, ರಾಮ-ನಾಮ ಮಾಡುತಿದ್ದ ಒಂದು ವಾಣಿ ಕೇಳಿಸುತ್ತದೆ. ವಾಣಿ ಎಲ್ಲಿಂದ ಬರುತಿದೆ ಎಂದು ವ್ಯಾಸರಾಯರು ಹುಡುಕುತ್ತ ಹೋಗುತ್ತಾರೆ. ಆ ಒಂದು ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾಗುತ್ತೆ. ಆಗ ವ್ಯಾಸರಾಯರು ಕೇಳಿಕೊಳ್ಳುತ್ತಾರೆ, ಈ ಕ್ಷೇತ್ರದಲ್ಲಿ ನೆಲೆಸಿ ಜನರಿಗೆ ಅನುಗ್ರಹ ಮಾಡಿಕೊಡಬೇಕಾಗಿ ಕೇಳಿ ಕೊಳ್ಳುತ್ತಾರೆ. ಆಗ ಆಂಜನೇಯ ಸ್ವಾಮಿಯು ತಥಾಸ್ತು ಎಂದು ಹೇಳಿ ಆ ಕ್ಷೇತ್ರದಲ್ಲಿ ನೆಲೆಸುತ್ತಾರೆ

ಭೇಟಿ ನೀಡಿ
ಚನ್ನಪಟ್ಟಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section