ಶ್ರೀ ಸಂಜೀವರಾಯ ಸ್ವಾಮಿ ದೇವಾಲಯ

ಶ್ರೀ ಸಂಜೀವರಾಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೂಸಹಳ್ಳಿ ಗ್ರಾಮದಲ್ಲಿ ಇರುವ, ಸುಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವ, ಶ್ರೀ ವ್ಯಾಸರಾಯರು ಸ್ವತಃ ಪ್ರತಿಷ್ಠಾಪಿಸಿದ ದೇವಾಲಯವಾಗಿದೆ.

ಶ್ರೀ ಸಂಜೀವರಾಯ ಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 63 ಕಿ.ಮೀ
  • ರಾಮನಗರ – 10 ಕಿ.ಮೀ
  • ರಾಮನಗರ ರೈಲ್ವೆ ನಿಲ್ದಾಣ – 10 ಕಿ.ಮೀ
  • ಚನ್ನಪಟ್ಟಣ – 4 ಕಿ.ಮೀ

ಇತಿಹಾಸ

ಈ ದೇವಾಲಯವು ಸುಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವು ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಆ ಸಮಯದಲ್ಲಿ ವ್ಯಾಸರಾಯರು ತಮ್ಮ ಅನುಷ್ಠಾನವನ್ನು ಮುಗಿಸಿ ವಾಪಸು ತೆರಳುತ್ತಿದ್ದಾಗ, “ರಾಮನಾಮ” ಜಪಿಸುತ್ತಿದ್ದ ಒಂದು ದಿವ್ಯ ವಾಣಿ ಅವರ ಕಿವಿಗೆ ಕೇಳಿಸಿತು. ಆ ವಾಣಿ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಹುಡುಕುತ್ತ ಹೋದರು.

ಆ ಸಮಯದಲ್ಲಿ ಅವರಿಗೆ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾಯಿತು. ಆಗ ವ್ಯಾಸರಾಯರು ಪ್ರಾರ್ಥಿಸಿ — “ಸ್ವಾಮೀ, ನೀವು ಈ ಕ್ಷೇತ್ರದಲ್ಲಿ ನೆಲೆಸಿ ಜನರಿಗೆ ಅನುಗ್ರಹ ಮಾಡಬೇಕು” ಎಂದು ಬೇಡಿಕೊಂಡರು. ಅದಕ್ಕೆ ಶ್ರೀ ಆಂಜನೇಯ ಸ್ವಾಮಿಯು “ತಥಾಸ್ತು” ಎಂದು ಆಶೀರ್ವದಿಸಿ, ಆ ಕ್ಷೇತ್ರದಲ್ಲೇ ಶ್ರೀ ಸಂಜೀವರಾಯ ಸ್ವಾಮಿಯಾಗಿ ಶಾಶ್ವತವಾಗಿ ನೆಲೆಸಿದರು.

ಭೇಟಿ ನೀಡಿ
ಚನ್ನಪಟ್ಟಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section