ಬಸದಿ ಬೆಟ್ಟ ಮಂದರಗಿರಿ

ಬಸದಿ ಬೆಟ್ಟ ಮಂದರಗಿರಿಯು ಕರ್ನಾಟಕ ರಾಜ್ಯದ ತುಮುಕೂರು ಜಿಲ್ಲೆಯ ಪಂಡಿತನಹಳ್ಳಿ ಎಂಬ ಗ್ರಾಮದಲ್ಲಿ ಇದೆ. ಮಂದರಗಿರಿಯು ಒಂದು ಏಕಶಿಲಾಬೆಟ್ಟವಾಗಿದೆ. ಈ ಬೆಟ್ಟವನ್ನು ಬಸದಿ ಬೆಟ್ಟವೆಂದು ಸಹ ಕರೆಯುತ್ತಾರೆ. ಭಾರತದ ಬೃಹತ್ ಏಕಶಿಲಾಬೆಟ್ಟಗಳಲ್ಲಿ ಒಂದು ಎನಿಸಿರುವ ಈ ಬೆಟ್ಟದ ಮೇಲೆ 04 ಬಸದಿಗಳಿವೆ. ಈ ಬೆಟ್ಟಕ್ಕೆ ಬಸದಿ ಬೆಟ್ಟ ಎಂಬ ಹೆಸರು ಬರಲು ಕಾರಣ ಇದರ ಮೇಲಿರುವ ಜೈನ ಬಸದಿಗಳು.

ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ತುಮಕೂರು ನಗರದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ ಹಾಗೂ ತುಮಕೂರು ಬಳಿಯ ಕ್ಯಾತ್ಸಂದ್ರದಿಂದ ಕೇವಲ 03 ಕಿ.ಮೀ ದೂರದಲ್ಲಿದೆ.

ಇಲ್ಲಿ ಇರುವ ೪ ಬಸದಿಗಳಲ್ಲಿ02 ಬಸದಿಗಳು ಜೈನತೀರ್ಥಂಕರರಾದ ಚಂದ್ರನಾಥರ ಬಸದಿ, 01 ಕೃಪಾಶ್ವನಾಥರ ಪುರಾತನ ಬಸದಿ ಮತ್ತು 01 ಪಾಶ್ವನಾಥರ ಬಸದಿ ಆಗಿದೆ. ಈ ಬಸದಿಗಳೆಲ್ಲವನ್ನು ಪೂರ್ತಿ ಶಿಲೆಯಲ್ಲಿ ನಿರ್ಮಿಸಲಾಗಿದೆ. ಈ ಬಸದಿಗಳು ಸುಮಾರು 1000 ಸಾವಿರಕ್ಕೂ ಹಳೆಯದಾದ ಇತಿಹಾಸ ಹೊಂದಿವೆ.

ಇಲ್ಲಿನ ಕಲ್ಲಿನ ಹಾಸಿನ ಮೇಲೆ ಬೃಹದಾಕಾರದ ಪಾದದ ಕೆತ್ತನೆ ಇದೆ. ಇದನ್ನು ಭೀಮಪಾದ ಎಂದು ಕರೆಯಲಾಗುತ್ತದೆ. ಈ ನಾಲ್ಕೂ ಬಸದಿ ಮಂದಿರಗಳಲ್ಲಿ ಒಂದು ವೈಶಿಷ್ಟ್ಯವಿದೆ ಈ ಯಾವ ಬಸದಿಗೂ ಬಾಗಿಲುಗಳೇ ಇಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾದ ಬಾಹುಬಲಿಯ ಅನುಯಾಯಿಗಳಾದ ತೀರ್ಥಂಕರರ ಗುಡಿಯಲ್ಲಿ ಕದ್ದು ಒಯ್ಯುವಂಥದ್ದೇನೂ ಇಲ್ಲ. ಎಲ್ಲ ತೊರೆದವರಿಗೆ ಬಾಗಿಲುಗಳ ಬಂಧವೇಕೆ ಎಂಬುದನ್ನು ಇದು ಸಾರುವಂತಿದೆ. ಬೆಟ್ಟದ ಮೇಲೆ ಶಿಲಾ ಶಾಸನಗಳೂ ಇವೆ.

ಈ ಬೆಟ್ಟದ ಮೇಲೆ ವಿಶಿಷ್ಟತೆ ಏನು ಎಂದರೆ ಗುರುಮಂದಿರ. ಈ ಗುರುಮಂದಿರ ಸುಮಾರು ೮೧ ಅಡಿ ಎತ್ತರದಲ್ಲಿ ಎದ್ದು ಪಿಂಚಿ ಆಕಾರದಲ್ಲಿ ಇದೆ. ಪಿಂಚಿ ಎಂದರೆ ನವಿಲಿನ ಗರಿಗಳಿಂದ ಮಾಡಿದ ಮುಚ್ಚಲಿಕ್ಕೆ ಎಂದು ಅರ್ಥ. ಈ ಪ್ರಪಂಚದಲ್ಲಿ ಪಿಂಚಿ ಆಕಾರದ ಮಂದಿರ ಎಂದು ಬಸದಿ ಬೆಟ್ಟ ಮಂದರಗಿರಿಯು ಪ್ರಸಿದ್ದಿ ಪಡೆದಿದೆ.

ಭೇಟಿ ನೀಡಿ
ತುಮಕೂರು ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section